ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ 05.12.2017
ದಿನಾಂಕ 05.12.2017 ರಂದು ಡಾ.ರಾಜೇಶ್ ವೈದ್ಯಾಧಿಕಾರಿಗಳು ಹೆರಿಗೆ ಆಸ್ಪತ್ರೆ ಅತ್ತಿಗೋಡು ಇವರು ಮಕ್ಕಳಲ್ಲಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಉಪನ್ಯಾಸ ನೀಡಿದರು. ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿ ಮೂರು ಬಹುಮಾನಗಳನ್ನು ನೀಡಿದರು. ಪ್ರಥಮ ಬಹುಮಾನ 10ನೇ ತರಗತಿ ವಿದ್ಯಾರ್ಥಿನಿ ರೋಜ ಟಿ.ಸಿ. ಪಡೆದುಕೊಂಡಳು.
ಕಿರಿಯ ಆರೋಗ್ಯ ಸಹಾಯಕರಾದ ಬಿ.ಎಲ್.ಉಷಾ, ಸುಚಿತ್ರಾ ಮತ್ತು ರವಿ ಡಿ. ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
No comments:
Post a Comment